Thursday, February 10, 2011

ಮನಸ್ಸು-ಬುದ್ದಿಯ ಪಿಕಲಾಟ..

ಗಂಡ ಹೆಂಡತಿ ಜಗಳವಾಡಿದ ಬಳಿಕ..

ಒಳ ಮನಸ್ಸು: ಅವಳೊಂದಿಗೆ ಮಾತಾಡು ಅವ್ಳು ಖಂಡಿತ ನಿನ್ನನು ಕ್ಷಮಿಸುತಾಳೆ..
ಬುದ್ದಿ: ಹೇ.. ಅಂತ ತಪ್ಪು ನೀನೇನು ಮಾಡಿಲ್ಲ ತಪಾಯ್ತು ಅಂತ ಕೇಳಿದರೆ ನಾಳೆ ಇಂದ ನೀನು ಅವಳ ಗುಲಾಮಾ..
ಒಳ ಮನಸ್ಸು  ಪಾಪ ಅಳುತ ಇದ್ದಾಳೆ..
ಬುದ್ದಿ: ಅತ್ತರೆ ಅಳುತಾಳೆ ಬಿಡು ಬುದ್ದಿ ಬರಲಿ..
ಒಳ ಮನಸ್ಸು  ಛೇ!! ಕಣ್ಣೀರು ಆದರು ಒರೆಸಬೇಕು ನಾನು ಬೇರೆ ಯಾರಿಗೋ ತಲೆ ಬಾಗುತ್ತಿಲ್ಲ ನನ್ನ ಹೆಂಡತಿ ಅಲ್ಲವಾ??
ಬುದ್ದಿ: ಹೋಗು ಒರೆಸು ಅಮೇಲೆ ಮಾತು ಕೇಳು ಆಹಾ.. ಈಗ ಬಂದುಬಿಟ್ರ ಕಣ್ಣೀರು ಒರೆಸೊಕ್ಕೆ.. ಬಯೋವಾಗ ಎಲ್ಲಿತ್ತೊ ಬುದ್ದಿ ಅಂತ..
ಒಳ ಮನಸ್ಸು  ಪಾಪ ನೊಂದಿದ್ದಾಳೆ ಸಮಾಧಾನಾ ಹೇಳಿಬರುತೇನೆ...
 ಬುದ್ದಿ: ಹೋಗು ಹೋಗು.. ವಾಪಾಸು ಬರೊದಿಲ್ಲ ನೀನು.. ಕಟ್ಟಿ ಹಾಕ್ತಾಳೆ.ಒಳ ಮನಸ್ಸು  ಹೋಗು ಹೋಗು..
ಬುದ್ದಿ: ಬೇಡ ಎದ್ದು ಹೊರಗೆ ಬಾ...


ಎದ್ದು ಹೊರಗೆ ಬಂದ ನಂತರ...

ಒಳ ಮನಸ್ಸು ಛೇ!! ಏಕೆ ನನ್ನ ಮಾತು ಕೇಳೊಲ್ಲ...
ಬುದ್ದಿ: ನಿನ್ನ ಮಾತು ಕೇಳಿದರೆ ಅಷ್ಟೇ..
ಒಳ ಮನಸ್ಸು  ಹೊರಗೆ ಬರಬಾರದಿತು...
ಬುದ್ದಿ: ಬಂದಿದು ಒಳೆದಾಯ್ತು ಆ ಕೆಟ್ಟ ಮುಖ ನೋಡೋದು ತಪ್ಪಿತು
ಒಳ ಮನಸ್ಸು  ಅತೀ ಆಯ್ತು ಆ ಮುಖವನ್ನೆ ನೋಡಿ ನೀನು ಮದುವೆಗೆ ಒಪ್ಪಿದು ನಿನಗೆ ಅವಳು ಮುದ್ದಿಸೊಕ್ಕೆ ಬೇಕು ಊಟ ಮಾಡಿಸೊಕ್ಕೆ ಬೇಕು ಜೊತೆಯಲ್ಲಿ ನಡೆಯಲು ಬೇಕು ಇದೀಗ ಬೇಡವಾದಳಾ??
ಬುದ್ದಿ: ಅದು ಅದು..
ಒಳ ಮನಸ್ಸು  ಈಗಲಾದರು ಒಳಗೆ ಹೋಗಿ ಸಮಧಾನಾಪಡಿಸು...
ಬುದ್ದಿ: ಹೋಗಪ್ಪ ಇನ್ನು ನನ್ನ ಮಾತಿಗೆ ಬೆಲೆ ಇಲ್ಲ.... :(
ಒಳ ಮನಸ್ಸು    :) :) :)

ನಿಮ್ಮವ...
ವಿ .. :)

No comments:

Post a Comment