Monday, January 17, 2011

ಇದ್ದಕಿದಂತೆ ಬೆಲೆ ಏರಿಸೋ ಮಾರ್ಕೆಟ್ ಮಂದಿ...

                     ಹೀಗೆ ಮೊನ್ನೆ ನಮ್ಮ ನೆಂಟರೊಬ್ಬರು ದೈವದೀನರಾದರು ಸರಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರ ಮುಖ ಕಡೆಯ ಬಾರಿ ಎಂಬಂತೆ ನೋಡಲು ಹೊರಟೆ... ದಾರಿಯಲ್ಲಿ ಹೋಗಬೇಕದರೆ ಅನಿಸಿತು ಬರಿಗೈಲ್ಲಿ ಹೇಗೆ ಹೋಗೊದು ಒಂದು ಹೂವಿನ ಹಾರ ತೆಗೆದುಕೊಳೊಣ ಅಂತಾ ಕೆ.ಆರ್.ಮಾರ್ಕೆಟ್ ಇಳಿದು ಹಾರ ತರಲು ಹೊರಟೆ..

                      ಅದುವರೆಗು ನಾನು ಯಾವತ್ತು ಹೂ ತರಲು ಹೋದವನೆ ಅಲ್ಲ ಅದರಲ್ಲೂ "ಕೆ.ಆರ್.ಮಾರ್ಕೆಟ್" ಎಂಬ "ಜನ ಜಾತ್ರೆಗೆ"...
ಕೆ.ಆರ್.ಮಾರ್ಕೆಟ್ ಎಂದರೆ ನನಗೆ ಕಾಲಿಟ್ಟರೆ ಜಾರಿ ಬೀಳುವಂತಾ ಗಲಿಜು ಕೊಳಚೆ ಜಾಗ ಎಂಬುದೆ ನೆನಪಗುತ್ತೆ.. ಒಳಗೆ ಹೋಗಿ ಕೆಳಗೆ ಇಳಿದು ನಡೆದುಕೊಂಡು ಹಾಗೆ ನೋಡುತಾ ಇದ್ದವನಿಗೆ ಇದ್ದಕಿದಂತೆ ಜ್ಞಾನೊದಯ ಆಯ್ತು ನಾನು ಹೀಗೆ ನೋಡುತಾ ನಿಂತಿದ್ರೆ ನನಗೆ ಟೋಪಿಯೊಂದನು ಆರಾಮಾಗಿ ತೊಡಿಸಿಬಿಡುತಾರೆ ಅಂತ.. ಏನೋ ಎಲ್ಲಾ ತಿಳಿದವನಂತೆ ನಟಿಸುತಾ ಬೇಗ ಬೇಗನೆ ಹೆಜ್ಜೆ ಹಾಕುತ್ತ ಹೊರಟೆ..
 

                      ಸರಿ ಒಂದು ಕಡೆ ನಿಂತು ಹಾರ ಎಷ್ಟು ಗುರು? ಅಂದೆ ಅದಕ್ಕೆ ಅಲ್ಲಿದ ಹುಡುಗ ನನ್ನನು ನೋಡಿ(ನಾನು ಅವತ್ತು ಬಿಳಿಯ ಟಿ-ಶರ್ಟ್ ತೊಟ್ಟಿದೆ ನನ್ಗೆ ಅದು ಸ್ವಲ್ಪ ಚೆನ್ನಾಗಿ ಕಾಣ್ಣುತೆ ನಂಬ್ರಿ) 180 ರೂಪಾಯಿ ಅಂದ ನಾನು ಏನು ನಾ ಹೆಂಗ್ ಕಾಣಂತಾ ಇದ್ದಿನಿ ಬಕ್ರ ತರ ಇದ್ದಿನಾ?? ಸುಮ್ಮನೆ ಕೊಡೊ ರೇಟು ಮಾತಾಡು ಅಂದೆ ನೋಡಿ ಸಾರ್ ನಿಮ್ಮಗೆ ಒಂದು10ರೂಪಯಿ ಕಡಿಮ್ಮೆ ಕೊಡ್ತಿನಿ ಬೇಕಿದ್ರೆ ತೊಗೊಳಿ ಇಲ್ಲ ಅಂದ್ರೆ ಹೋಗಿ ಅಂದ.. ನಾನು ಎಲಾ ನನ್ ಮಗನೇ ನಿನ್ಗೆ ಇಷ್ಟೊಂದು ಬಿಲ್ಡ-ಅಪ್ ಬೇಕಾ ಅಂತಾ ಮುಂದೆ ಹೋದೆ.

                      ಹೋಗ್ತಾ ಇನೊಂದು 2 ಕಡೆ ವಿಚಾರಿಸಿದೆ 200ರೂಪಾಯಿ ಅಂತಾ ಅಂದ್ರು ಕಡಿಮೆ ಮಾಡಿಕೊಡ್ರಿ 2 ಹಾರ ತೊಗೊಬೇಕು ಅಂದ್ರೆ 350ರೂಪಾಯಿ ಕೊಡಿ ತೊಗೊಂಡ್ ಹೋಗಿ ಅಂತಾರೆ ಇದ್ಯಾಕೊ ಆಗೋ ಕೆಲಸ ಅಲ್ಲ ಅಂತ ಆ ಮುಂಚಿನ ಅಂಗಡಿ ಹುಡುಕುತಾ ಹೋದೆ.. (ಅಲ್ಲಿ ಅಂಗಡಿಗಳೆ ದೊಡ್ಡ Confusionu) ಕಡೆಗೂ ಸಿಕ್ತು ಆ ಅಂಗಡಿ, ಹುಡುಗ ನನ್ನ ನೋಡಿದ ಸರಿ ಕೊಡಪ್ಪ 2 ಹಾರ ಅಂದ್ರೆ ಆಸಾಮಿ 190 ಗುರು ರೇಟು ಅಂತಾ ಅನೋದಾ?? ಹಿಂಗೆ ಹೋಗಿ ಹಂಗೆ ಬರೋ ಅಷ್ಟ್ರಲ್ಲಿ ಏಕಪ್ಪಾ ರೇಟು ಏರಿಸಿ ಬಿಟಿದಿಯಾ ಅಂದ್ರೆ.. ಅವ್ನು ರೋಜಾ ಹೂವಾ ರೇಟು ಜಾಸ್ತಿ ಆಯ್ತು ಗುರು ಅದಕ್ಕೆ ಅಂತಂದಾ... ನೀನು ಅವಾಗ್ಲೆ ಇರೊ ಹೂವಾನೆ ತಾನೆ ಮಾರುತ ಇರೋದು ಹಾಗಿದ ಮೇಲೆ ಹಳೆ ರೇಟಿಗೆ ಹೂವಾ ಕೊಡು ಅಂದೆ ಅವ್ನು ಜಗಳಕ್ಕೆ ಬಿದ್ದ ಹಾಗೆ ನೋಡ್ ಗುರು ಬೇಕಾ ತೊಗೋ ಇಲ್ವಾ ಜಾಗ ಖಾಲಿ ಮಾಡು ಸುಮ್ನೆ ಯಾಕ್ ತಲೆ ತಿಂತಿಯ ಅಂತಾ ಬೈದೆಬಿಟ್ಟಾ..

                     ಸರಿ ಇವಾಗ ಇನೊಮ್ಮೆ ಹೋಗಿ ಅಂಗಡಿ ಸುತ್ತಿ ಬಂದ್ರೆ ಈ ಆಸಾಮಿ ಪಕ್ಕಾ 200 ರೂಪಾಯಿ ಅಂತಾನೆ ಅಂತಾ ಹೇಳಿ 2 ಹಾರ ತೊಗೊತಿನಿ 300 ರೂಪಾಯಿ ಹಾಕ್ಕೊ ಟೊಟಲ್ ರೇಟು ಅಂದೆ ಬರೊಲ್ಲಾ ಸಾರ್ ಅಂದ ಸದ್ಯ ಸ್ವಲ್ಪಾ ಮರ್ಯಾದೇ ಸಿಕ್ಕ್ತು ಅಂದ್ರೆ ನಮ್ಮ್ ರೂಟಿಗೆ ಬಂದಾ ಅಂತಾ ಹೇಳಿ ನೋಡ್ ಗುರು ಕೊಡೊ ಹಂಗಿದ್ರೆ ಕೊಡು ಇಲ್ವಾ ಬ್ಯಾಡ ಬಿಡು ಅಂತಾ ಹೊರಟೆ ಅವ್ನು ಬನ್ನಿ ಸಾರ್ ಕೊಡೋಣಾ ಅಂತಾ ಕವರ್ ಒಂದಕ್ಕೆ 2 ರೂಪಾಯಿ ಎಕ್ಸಟ್ರಾ ಕಿತ್ತ್ಕೊಂಡು ಹೂ ಕೊಟ್ಟಾ ನನ್ಗೆ ಕಾಡೊ ಪ್ರಶ್ನೆ ಅಂದ್ರೆ ಯಾಕೆ ಇದ್ಕಿದ ಹಾಗೆ ರೇಟು ಜಾಸ್ತಿ ಮಾಡಿದ್ರು ಅಂತಾ...???


ನಿಮ್ಮವ 
ವಿ

Friday, January 14, 2011

ಹೊರ ಬರಬೇಕಿತ್ತಾ?? ನಿನ್ನಿಂದ... ನಿನ್ನ ನೆನಪಿಂದ????

ಕಟ್ಟಿದ ಕನಸುಗಳಿಗೆ ಕಾವಲಾಗಿ
ಓಡೆದ ಮನಸುಗಳಿಗೆ ಆಸರೆಯಾಗಿ 
ಸ್ನೇಹಕ್ಕೆ ಸಾರತಿಯಗಿರುವೆ
ನೀ ಬಿಟ್ಟ ಕ್ಷಣದಿಂದ


ಸಂತೋಷ?? ಹಾ.. ಎಲ್ಲೋ ಕೆಲವೆಡೆ ಮಾತ್ರ ಮಿಕ್ಕಿದು ನಿನಗೆ ಗೊತ್ತಿದೆ ಅನಿಸುತ್ತೆ.. ನನಗೆ ಗೊತ್ತು ಇವೆಲ್ಲಾ ನೀನು ಓದುತೀಯಾ ಅಂತ ಆದರೂ ನೀ ಪ್ರತಿಕ್ರಯಿಸುವುದಿಲ್ಲ.. ನಾ ಅದನ್ನು ನಿರಿಕ್ಷಿಸುವುದಿಲ್ಲ...

ಜಗಳಗಳು ಸಾಮಾನ್ಯ ಅದರೆ ಒಂದು ಮಟ್ಟಕ್ಕೆ ಮಾತ್ರ... ಒಮ್ಮೆ ಮನಸ್ಸಿಗೆ ಘಾಸಿ ಅಗಿಬಿಟ್ಟರೆ ತುಂಬ ಕಷ್ಟಾಸಾದ್ಯ ಮತೆ ಒಂದು ಮಾಡಲು.. ನಿನ್ನ ನೆನಪಿಂದ ಹೊರ ಬರಲು ಸುಮಾರು ಸಮಯ ಬೇಕು ಇಗಲು ದಿನಕ್ಕೊಂದು ನೂರು ಬಾರಿಯಾದರು ನೆನಪಿಸಿಕೊಳುತ್ತೀನಿ


ಗೊತ್ತಿಲ್ಲ ನೀನು ಕೂಡ ನೆನಪಿಸಿಕೊಳುತೀಯ ಇಲ್ಲಾ ಮರೆತೇ ಬಿಟ್ಟಿದ್ಯ ಅಂತಾ ನಿನಗೆ ಫೋನ್ ಮಾಡಿದಾಗ ತುಂಬಾ ನೋವಾಯ್ತು ಕಣೇ..

ನಿನ್ನ ಮನಸಿಗೆ ಅಷ್ಟು ದೊಡ್ಡ ಘಾಸಿಯಾಗಿದೆ
ಅಂತ ಅವಾಗ ತಿಳಿಯಿತು ಮತ್ತೆಂದು ನಾನು ಫೋನ್ ಮಾಡೋಲ್ಲಾ ಹುಡುಗಿ.. ನಿನ್ನ ನೆನಪು ಸಾಕು ಖುಶಿಯಾಗಿರು...

ನಿನ್ನ ಸಂತೋನ್ನು ಹಾರೈಸುವಾ

--ನವಿ--

Thursday, January 13, 2011



ನೀನಿಲ್ಲದೇ ಜೀವನ ಸಾಗೋದೆ ಇಲ್ಲ ಅಂತಾ ಹೇಳ್ತಾ ಇದವನ್ನು ಇವತು ಆಕಸ್ಮಿಕವಾಗಿ ನಿನ್ನ ಫೋಟೊ ಒಂದು ಸಿಕ್ಕಿದಾಗ ನಿನ್ನ ನೆನಪಾಯ್ತು... ಹಳೆಯ ನೆನಪುಗಳೊಂದಿಗೆ... ಏನೋ ಒಂದು ರೀತಿಯ ಹೊಸ ಅನುಭವ.. ಹಳೆಯ ಬಾಟ್ಲೆನಲ್ಲಿ ಹೊಸ ಮದ್ಯ ಬೆರೆತಂತ್ತೆ... ಇಲ್ಲಿ ಭೋರ್ಗರೆಯುತ್ತಿರುವ ಸಮುದ್ರದ ಅಲೆಗಳು ಎಂತಾ ಸುಮಧುರವಾದ ಭಾವನೆ ನೀಡುತ ಇದೆ ಗೊತ್ತಾ??

ನಿಮಿಷಕ್ಕೆ ನಾಲ್ಕು ಮೆಸೇಜುಗಳನ್ನು ಮಾಡುತ್ತ ಇದ್ದ ಹುಡುಗಿ ಇಂದು ಎಲ್ಲಿದಿಯಾ ಅಂತಾನು ನಂಗೆ ತಿಳಿದಿಲ್ಲ ನಾನು ಎಲ್ಲಿದೀನಿ ಅಂತಾ ನಿನಗೂ ತಿಳಿದಿಲ್ಲ.. ಭೋರ್ಗರೆಯುವ ಅಲೆಗಳೊಂದಿಗೆ ಮಾತನಾಡುತಾ ಕುಳಿತು ಬಿಡೋಣ ಅನ್ನಿಸುತಾ ಇದೇ ಸೂರ್ಯ ತಂಪಾಗಿ ಕೆಂಪಾಗಿ ತನ್ನ ದಿನದ ಕೆಲಸ ಮುಗಿಸಿ ಹೊರಡುತಿದಾನೆ.. ಇದರ ಜೊತೆಗೆ ನಿನ್ನ ಸುಂದರ ನೆನಪು..       ವ್ಹಾ!!!

ಕಾಫೀಯ ಸಿಪ್ ಒಂದನ್ನು ತೆಗೆದುಕೊಂಡು ಪುನಃ ಜೇಬಿನಲ್ಲಿದ ನಿನ್ನ ಫೋಟೋ ಹೊರ ತೆಗೆದೇ ಏನು ಬದಲಾವಣೆ ಇಲ್ಲ ಅದೆ ನಗು ಅದೆ ಕಂಗಳು.. ಸುಂದರ ಛೇ!! ಸುಂದರ ಎನುವುದಕ್ಕಿಂತ ಲಕ್ಷಣ ಎನ್ನಬಹುದು... ಮಾತೇ ಆಡದೇ ಮೌನವಾಗಿ ನಿನ್ನ ಪ್ರೀತಿಸಿದೆ.. ಕಡೆಯವರೆಗೂ ನಿನಗೆ ಹೇಳದೆನೆ ಉಳಿದೆ...

ನಮ್ಮ ಕ್ಲಾಸಿನ ಹುಡುಗಿಯೊಬ್ಬಳಿಗೆ ಮದುವೆಯಾದಾಗ ಅವಳನ್ನು ಪ್ರೀತಿಸುತ್ತಿದ್ದ ಹುಡುಗನಿಗೆ ಅವಳು ಸಿಗದೇ ಅವನು ಮನಸಾರೆ ಅತ್ತಾಗಲೇ ನನಗೆ ತಿಳಿದಿದು ಇಷ್ಟು ನೋವಾಗುತ್ತೆ ಅಂತಾ.. ನನಗೆ ಅಂತಾ ಪರಿಸ್ತಿತಿಯು ಬರಲಿಲ್ಲ ನೀ ಅದಕ್ಕೆ ಎಡೆ ಮಾಡಿ ಕೂಡ ಕೊಡಲಿಲ್ಲ ಬಿಡು..

ನಿನ್ನ ಜೊತೆ ಮಾತು ಕಡಿಮೆ ನನ್ನದು ಆದರೆ ಮೆಸೆಜು ಜಾಸ್ತಿ... ಅದರೆ ಒಂದು ಸಣ್ಣ ಭಿನಾಭಿಪ್ರಾಯದ ಕಾರಣ ನಮ್ಮ ಮಾತು ನಿಂತು ಹೋಯ್ತು.. ನೀನು ಈ ಊರಿಂದ ಹೊರಟು ಹೋದೆ ನಂಗೆ ಬೇರೆ ಊರಿನಲ್ಲಿ ಕೆಲಸ ಸಿಕ್ಕಿತು.. Contact ಅನ್ನೋದು ತಪ್ಪಿ ಹೋಯ್ತು.. 

ಓಹೋ ಮಳೆ ಶುರುವಾಯ್ತು ಹೊರಗೆ ಹೋಗಿ ಮಳೆಯಲ್ಲಿ ನೆನೆಯಬೇಕೆನಿಸುತಿದೆ... ಆಹಾ!! ಮೊದಲ ಹನಿಯೊಂದು ಎಡ ಕೆನ್ನೆಯ ಮೇಲೆ ಬಿತ್ತು ಅದರೊಂದಿಗೆ ಮತ್ತೆ ನಿನ್ನ ನೆನಪಯ್ತು.. ಕಳೆದು ಹೋದ ಮುತ್ತನ್ನು ಹುಡುಕುವಂತೆ ಕಣ್ಣು ನಿನ್ನ ಬಿಂಬವನ್ನು ನೆನಪಿಸಿಕೊಳುತ್ತಾ ಇದೆ... ಮೇಲೆ ಮಿಂಚೊಂದು ಸರಿದಾಡಿತು....

ನಿನ್ನನ್ನು ಏಕಿಷ್ಟು ಪ್ರೀತಿಸಿದೆ?? ಕಾರಣವಿಲ್ಲದೆ... ನಿನ್ನ ನಗು ನನ್ನನ್ನು ಸೆಳೆದಿರಬಹುದು, ನಿನ್ನ ನೋಟ, ಮಾತಡುವ ಶೈಲಿ, ಮುಗ್ಡತೆ... ಒಬ್ಬ ಪ್ರಸಿದ್ದ ಬರಹಗಾರ ಹೇಳುವಂತೆ ಮನಸ್ಸು ನೋಡಿ ಯಾರು ಪ್ರೀತಿ ಮಾಡುವುದಿಲ್ಲ ಮೊದಲು ಅವರ ಫಿಸಿಕಲ್ ಬಾಡಿ ನೋಡಿ ಆಕರ್ಷಿತರಾಗ್ತರೇ ಆಮೇಲೆ ಪ್ರೀತಿಯ ಮಾತು ಅಂತಾ ಬಹುಶಃ ನನಗೂ ಹಾಗೇ ಇದ್ದಿರಬಹುದು...


ನಿಮ್ಮವ 

ನವಿ

Monday, January 3, 2011

ತಿಕ್ಲುರಲ್ಲಿ.. ತೀರಿಹೋದಾ ಸುದಿಗಾರ

ವಾರ್ತೆಗಳಿಗೆ ಸ್ವಾಗತ ನಾನು ಸಂಪಂಗಿನಗರದ ಸಾವಿತ್ರಮ್ಮ... ಹಲವಾರು ದಿನಗಳಿಂದ ಇದ್ದಬದ್ದ ಸುದ್ದಿಯನ್ನು ಬಾವಿ ಇಂದ ಹೊರ ಹಾಕುತ್ತಿದ ನಮ್ಮ ಸುದ್ದಿ ಸಂಪದಕರಾದ ಒಂದೆದೇ ಒರೆ ಮಾದಪ್ಪ ಇಂದು ಬೆಳಿಗ್ಗೆ  ನಿಧನರದರೆಂದು ಹೇಳಲು ವಿಶಾದಿಸುತೇವೆ... 

ಇದರ ಬಗ್ಗೆ ಹೆಚಿನ ಮಾಹಿತಿ ನೀಡಲು ನಮ್ಮೊಂದಿಗೆ ಈಗ ನಮ್ಮವರೆ ಆದ ಕೋಳಿ ಕಳ್ಳ ಇದ್ದಾರೆ..

ಸಸ- ಹೇಳಿ ಕೋಳಿ ಕಳ್ಳ ಅವ್ರೆ ಕೇಳ್ಸ್ತ ಇದ್ದಿಯಾ?? 
(ಕೊಕ- ಹಾ!! ಈವಾಗ ಈವಾಗ ಕೇಳ್ಸ್ತು ಹೇಳಣ್ಣ..
ಸಸ- ಅಯ್ಯೊ ಕೋತ್ ನನ್ ಮಗನೇ ನಾನು ಅಣ್ಣ ಅಲ್ಲ ಕಣ್ಳಾ ಅಕ್ಕ
ಕೊಕ- ಅಯ್ಯೋ!! ಮತ್ತೆ ಇವತು ವಾರ್ತೆ ಓದೊಕೆ ತರ್ಲೆ ತಿಮ್ಮಪ್ಪ ಮತೆ ಬೀಡಿ ಬೋರಣ್ಣ ಅ
ಲ್ವಾ ಬರಬೇಕು ನೀ ಒಬ್ಳೆ ಯಾಕ್ ಬಂದೇ??
ಸಸ- ಅವ್ರಿಬ್ರು ಕೊಡಂಗಿ ಹಾಡಿತು ಕೋಳಿ ಹಾರಿತು ನೋಡೋಕ್ ಹೋದ್ರಲ್ಲಾ ಮತೆ ನಿನ್ ಹೆಂಡ್ರು ಚನ್ನಗವ್ಳಾ?
ಕೊಕ- ಅಯ್ಯೋ!! ಅದ್ಯಕ್ ಕೇಳ್ತಿಯಕ್ಕ ಅವ್ಳು, ನನ್ ಮಗ ಇಬ್ರು ಬಡ್ಕೊತಾನೆ ಇರ್ತಾರೆ
ಸಸ- ಅದ್ಯಾಕಲ್ಲಾ?
ಕೊಕ- ಇವ್ಳು ಬೆಳಿಗ್ಗೆ ಹೊತ್ನಾಗೆ ಬಡ್ಕೊಂಡ್ರೆ ಅವಾ ರಾತ್ರೆ ಕಣ್ಣಕ್ಕ ಒಟ್ಟರೆಯಾಗಿ ಹೇಳ್ಬೆಕಂದ್ರೆ ನನ್ಗೆ ನೆಮ್ಮದಿ ಸಿಕ್ತಾ ಇಲ್ಲ
ಸಸ- ವಾರ್ತೆ ಹೇಳೊ ಹೋಗ್ಲಿ ಇವಾಗ)
ಕೊಕ- ಹೇಳಿ ಹೇಳಿ ಮಡಮ್ ಇವಾಗ ಕೆಳ್ಸ್ತಅಯ್ತೆ..
ಸಸ- ಕೋಳಿ ಕಳ್ಳ ಇವಾಗ ಅಲ್ಲಿನ ಪರಿಸ್ತಿತಿ ಹೆಂಗಿದೆ??
ಕೊಕ- ಹಾ.......... ಇವಾಗ ನೀವೆನು ನೋಡ್ತಾ ಇದ್ದಿರಾ?? ಈ ಆರ್ಥನಾದಗಳು, ಈ ಅಳುವ ಶಬ್ಡಗಳು ಇವರ ಅಕ್ರಂಧನ ಮುಗಿಲು ಮುಟುತಾ ಇದೆ ಅಂತಾನೆ ಹೇಳ್ಬೋದು..
ಸಸ- ಅವ್ರ ಸಾವು ಹೇಗಾಯ್ತು ಅಂತ ಹೇಳ್ತಿರ ಕೋಳಿ ಕಳ್ಳ?
ಕೊಕ- ಇವ್ರು ನಮ್ಮ ಒಂದೆದೇ ಒರೆ ಮಾದಪ್ಪ ಏನಿದ್ರು ಆ ಬಾವಿನಲ್ಲಿ
(ಸ್ವಲ್ಪಾ ಝುಮ್ ಹಾಕೋ ಬಾವಿಗೆ ಬ್ಯಾತ್ನಾ) ಅವ್ರು ಒಂದು ತಪ್ಪು ಮಾಡಿ ಈ ಒಂದು ಸಾವಿಗೆ ಶರಣಾಗಿದಾರೆ ಅಂತಾನೆ ಹೇಳ್ಬೋದು ಸಾವಿತ್ರಮ್ಮ.
ಸಸ- ಅದು ಹೇಗೆ ಹೇಗೆ ನಡಿತು ಹೇಳಿ ??
ಕೊಕ- ಇವ್ರು ಏನು ಈ ಬಾವಿನಲ್ಲಿ ಬಿದಿದ್ರೋ ಆಗ ಸುದ್ದಿ ಹುಡ್ಕ್ತ ಹುಡ್ಕ್ತ ಉಸಿರು ತೊಗೋಳೊದ್ನಾ ಮರೆತು ಹಾಗೆ ತಮ್ಮ ಪ್ರಾಣದ ಪಕ್ಷಿ ಏನಿತೋ  ಅದನ್ನಾ ಹಾರಿ ಹೋಗೊಲು ಬಿಟ್ಟಿದಾರೆ..(ಕಚಡ ಗಲೀಜು ನನ್ ಮಗ)
ಸಸ- ಇವರನ್ನು ಅಗಲಿ ನಮ್ಮ ಈ ಒಂದು ಚಾನೆಲ್ ಏನು ಇದೆ ಅದು ತುಂಬಾ ಸಂತಾಪನ ವ್ಯಕ್ತ ಪಡಿಸುತ್ತೆ
ಕೊಕ- ಒಟ್ಟಾರೆಯಾಗಿ ಹೇಳ್ಬೇಕು ಅಂದ್ರೆ ನಮ್ಮ ದೇಶ ಇಂದು ಒಬ್ಬ ಒಳ್ಳೆಯ ಸುದ್ದಿಗಾರನನ್ನು ಕಳೆದುಕೊಂಡಿದೆ (ಬಾರೊ
ಬ್ಯಾತ್ನಾ ಶೂಟ್ ಮುಗಿದಾದ್ ಮೇಲೆ ಎಣ್ಣೆ ಹಾಕೊಣ್ಣ ಇದೇ ಖುಶಿಗೆ) ಅಂತಾನೆ ಹೇಳ್ಬೋದು..
ಸಸ- ತುಂಬಾ ದುಃಖಾ ಆಗ್ತಾ ಇದೆ (ಒಂಡು ಅಡ್ವೆರ್ಟಯ್ಸೆಮೆನ್ಟ್ ಅದ್ರು ಹಾಕ್ರೋ)
ಕೊಕ- ಕ್ಯಾಮೆರಾ ಮೆನ್ ಬ್ಯಾತ್ನಾ
ಜೊತೆ ಕೋಳಿ ಕಳ್ಳ ಒತಿಕೆತ ಚಾನ್ನೆಲ್ ತಿಕ್ಲುರು..
ಸಸ- ಸುದ್ದಿಗಾಗಿ ಧನ್ಯವಾದ.... 


ಈಗ ಸಣ್ಣದಂದು ಬ್ರೇಕ್... ನಂತರ ವಾರ್ತೆ ಮುಂದುವರೆಯುತದೆ....